ಸುರೇಶ್ ಹೆಬ್ಳಿಕರ್ ಮನಮಂಥನ
Posted date: 04 Mon, Jan 2016 – 08:21:17 AM

ಕಿರಣ್ ರಜಪೂತ್ ಹಾಗೂ ಹರ್ಷಿತಾ ಮುಖ್ಯಭೂಮಿಕೆಯಲ್ಲಿರುವ ‘ಮನಮಂಥನ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಸುರೇಶ್ ಹೆಬ್ಳೀಕರ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.
ಎಪ್ಪತ್ತು, ಎಂಭತ್ತರ ದಶಕದ ಕನ್ನಡ ಚಿತ್ರರಂಗದಲ್ಲಿ ಆಲೆಮನೆ, ಕಾಡಿನ ಬೆಂಕಿ ಪ್ರಥಮ ಉಷಾಕಿರಣ, ಆಗಂತುಕ ಮುಂತಾದ ಹೆಸರಾಂತ ಚಿತ್ರಗಳನ್ನು ನೀಡಿದವರು ನಟ, ನಿರ್ಮಾಪಕ ನಿರ್ದೇಶಕ ಸುರೇಶ್ ಹೆಬ್ಳಿಕರ್.
ಅನಂತರ ಇವರು ಚಿತ್ರರಂಗದಿಂದ ದೂರು ಉಳಿದು ಪರಿಸರ ಪ್ರೇಮಿಯಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ. ಈಗ ಚಿತ್ರರಂಗಕ್ಕೆ ವಾಪಸ್ಸಾಗಿರುವ ಹೆಬ್ಳಿಕರ್ ಯಾವುದೇ ಸದ್ದು ಗದ್ದಲವಿಲ್ಲದೆ ಚಿತ್ರವೊಂದನ್ನು ನಿರ್ದೇಶಿಸಿ ತೆರೆಗೆ ಅಣಿಗೊಳಿಸಿದ್ದಾರೆ.
ಮಾನಸ ಆರ್ಟ್ಸ್ ಲಾಂಛನದಡಿಯಲ್ಲಿ ಡಾ|| ಅಶೋಕ್ ಪೈ ನಿರ್ಮಿಸಿರುವ ಮನಮಂಥನ ಸುರೇಶ ಹೆಬ್ಳಿಕರ್ ನಿರ್ದೇಶನದ ಮುಂದಿನ ಚಿತ್ರ.
ಶಿವಮೊಗ್ಗ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ನಡೆಸಿರುವ ಸುರೇಶ್ ಹೆಬ್ಳಿಕರ್ ಚಿತ್ರದಲ್ಲಿ ರಮೇಶ್ ಭಟ್ ಪಾತ್ರ ಅವರ ಚಿತ್ರ ಜೀವನದಲ್ಲೆ ಅತ್ಯುತ್ತಮ ಪಾತ್ರ ಚಿತ್ರವು ಎಲ್ಲಾ ವರ್ಗದ ಜನಗಳಿಗೆ ಇಷ್ಟವಾಗಲಿದ್ದು, ಅದರಲ್ಲೂ ವಿಶೇಷವಾಗಿ ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತುಂಬಾ ಮೆಚ್ಚುಗೆಯಾಗುತ್ತದೆ ಎಂದಿದ್ದಾರೆ.
ಚಿತ್ರಕ್ಕೆ ಡಾ. ಕೆ.ಎ. ಅಶೋಕ್ ಪೈ ಕಥೆ, ಪಿ. ರಾಜನ್ ಛಾಯಾಗ್ರಹಣ, ಪ್ರವೀಣ್ ಡಿ.ರಾವ್ ಸಂಗೀತ, ಎಂ.ಎನ್. ಸ್ವಾಮಿ ಸಂಕಲನವಿದ್ದು, ಚಿತ್ರ ಕಥೆ, ಸಾಹಿತ್ಯ ಸಂಭಾಷಣೆ, ನಿರ್ದೇಶನ ಸುರೇಶ್ ಹೆಬ್ಳಿಕರ್.  
ತಾರಾಗಣದಲ್ಲಿ ಸುರೇಶ್ ಹೆಬ್ಳಿಕರ್, ರಮೇಶ್ ಭಟ್, ಕಿರಣ್ ರಜಪೂತ್, ಅರ್ಪಿತಾ, ಸಂಗೀತ, ಸುಮನ್, ಶ್ರೀಧರ್, ಲಕ್ಷ್ಮೀ ಗೋಪಿನಾಥ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed